ವಿಷಯಕ್ಕೆ ಹೋಗಿ

Top ten Visit to Dakshina Kanada Temples

 ನೀವು ನೋಡಲೇಬೇಕು  ದಕ್ಷಿಣ ಕನ್ನಡ  ಹತ್ತು ಪ್ರಸಿದ್ಧ ದೇವಸ್ಥಾನಗಳು.

1.ಕುದ್ರೋಳಿ ಗೋಕರ್ಣನಾಥ ದೇವಸ್ಥಾನ:

      ಮಂಗಳೂರಿನಲ್ಲಿ ದಸರಾ ಸಮಯದಲ್ಲಿ ಭೇಟಿ ನೀಡಿದ್ರೆ, ದಸರಾ ಹಬ್ಬದ ವಿಶೇಷವಾಗಿ, ದಶಾವತಾರ ದೇವಿಯನ್ನು ನೋಡಬಹುದು ಮತ್ತು ವಿದ್ಯುತ್ ಅಲಂಕಾರದಿಂದ ಮಂಗಳೂರು ಮನಸೆಳೆಯುತ್ತದೆ. ದಸರಾ  ಕೊನೆಯ ದಿನದಂದು ದೇವಿಯ  ಮೆರವಣಿಗೆಯ  ಮತ್ತು 50ಕ್ಕಿಂತ ಹೆಚ್ಚು  ಟ್ಯಾಬ್ಲೋಗಳಲ್ಲಿ ತುಳುನಾಡಿನ ಸಂಸ್ಕೃತಿಕ ಕಾರ್ಯಕ್ರಮಗಳು, ಪ್ರಮುಖವಾಗಿ ಹುಲಿವೇಷ ಮತ್ತು ಯಕ್ಷಗಾನ  ಲಕ್ಷಾಂತರ ಮಂದಿ ನೋಡಿ ಕಣ್ತುಂಬಿಕೊಳ್ಳುತ್ತಾರೆ.#kudroli temple# 

2. ಕದ್ರಿಯ ಮಂಜುನಾಥ ದೇವಸ್ಥಾನ:

        ಈ ದೇವಾಲಯದಲ್ಲಿ ತೀರ್ಥವು  ಕಾಶಿಯಿಂದ ಬರುತ್ತೆ ಎನ್ನುವ ನಂಬಿಕೆ ಇದೆ. ಇಲ್ಲಿ ಏಳು ಕೆರೆಗಳು ತೀರ್ಥ ಸ್ನಾನಕ್ಕೆ
ಪ್ರಸಿದ್ಧ ಆಗಿದೆ.#kadri temple#

3.ಕುತ್ತಾರ್ ಕೊರಗಜ್ಜ ದೇವಸ್ಥಾನ :

       ಕಾರ್ಣಿಕದ ದೇವರೆಂದು ಪ್ರಸಿದ್ಧತೇ ಹೊಂದಿರುವ ಸ್ವಾಮಿ ಕೊರಗಜ್ಜ.ಕುತ್ತಾರ್ ಪದವು ಕೊರಗಜ್ಜನಾ ಮೂಲ ಸ್ಥಳ, ಕಳೆದುಕೊಂಡ ವಸ್ತು ಸಿಗಬೇಕು ಎಂದು  ಕಳೆದುಕೊಂಡವರು ಮೊದಲು ನೆನಪು ಮಾಡುವ ದೇವರೇ ಕೊರಗಜ್ಜ.ಈಗಲೂ ಇಲ್ಲಿ ರಾತ್ರಿ ಸಮಯದಲ್ಲಿ ಚಲ್ಲಿಸುವ ವಾಹನಗಳು ಲೈಟ್ ಹಾಫ್ ಮಾಡಿ ಚಲಿಸುವ ಪದ್ಧತಿ ಇದೆ . #Swami koragajja#


4. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ :

       ದೇವಿಯ ದೇವಸ್ಥಾನಲ್ಲಿ ಪ್ರಸಿದ್ಧಿ  ಹೊಂದಿರುವ ದೇವಸ್ಥಾನದಲ್ಲಿ ಒಂದು. ಈ ದೇವಸ್ಥಾವು ನದಿಯ ಮಧ್ಯ ನಿರ್ಮಾಣವಾಗಿದೆ. ಇಲ್ಲಿ ಮದುವೆಯಾಗದವರು,
ದೇವರ ಸನ್ನಿಧಿಯಲ್ಲಿ ಮದುವೆ ಮಾಡಿಕೊಳ್ಳುತ್ತೇನೆ ಅಂತ ಹರಕೆ ಮಾಡಿದ್ರೆ, ಬೇಗನೆ ಮದ್ವೆ ಸಂಬಂಧ ಕೂಡಿ ಬರುತ್ತೆ ಎಂಬ ನಂಬಿಕೆ ಇದೆ, ಇದರಿಂದ್ದ ಇಲ್ಲಿ ಭೇಟಿ ಕೊಟ್ಟಾಗ  ನವ ಜೋಡಿಯು ದೇವಿಯ  ಮುಂದೆ ಮಾಂಗಲ್ಯ ಕಟ್ಟಿಸಿಕೊಳ್ಳುತ್ತಾರೆ, ಈ ಕ್ಷೇತ್ರದಲ್ಲಿ ಯಕ್ಷಗಾನ   ತುಂಬಾ ಪ್ರಸಿದ್ದಿ ಹೊಂದಿದೆ.# Kateel shri Durgaparameshwari#

5.ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ :

            ಈ ಕ್ಷೇತ್ರದಲ್ಲಿ ದೇವಿಯ ವಿಗ್ರಹವು ವಿಶೇಷ ಮಣ್ಣು ಮತ್ತು ಮರದ ರಸದಿಂದ ನಿರ್ಮಾಣವಾಗಿದೆ.  ಇಲ್ಲಿ ಜಾತ್ರೆಯು  ಒಂದು ತಿಂಗಳು ನಡೆವುದು ವಿಶೇಷ, ಜಾತ್ರೆಯಲ್ಲಿ  ಕಲ್ಲಂಗಡಿಯು ಪ್ರಸಾದವಾಗಿರುತ್ತೆ. ಇಲ್ಲಿ ಪೊಳಲಿ ಚೆಂಡು  ಆಟ ಜಾತ್ರೆ ಸಂದರ್ಭದಲ್ಲಿ ನಡೆವುದು ವಿಶೇಷ.#Polali shri Rajarajeshwari#



6.ಪಣೋಲಿಬೈಲ್ ಕಲ್ಲುರ್ಟಿ ದೇವಸ್ಥಾನ :

       ಈ ಕ್ಷೇತ್ರವು ಸತ್ಯದೇವತೆ ಕಲ್ಲುರ್ಟಿ ಪ್ರಸಿದ್ದಿ. ಕ್ಷೇತ್ರದಲ್ಲಿ ಅಗೆಲು ಸೇವೆ ನೋಡಿದ್ದಾರೆ ಎಷ್ಟು ಕಾರ್ಣಿಕ ಎಂದು ತಿಳಿಯುತ್ತೆ. ಇಲ್ಲಿ ಭಕ್ತರ ಹರಕೆಯ  ಕೋಲಾ ಸೇವೆಯು ನಡೆಯಬೇಕಾದರೆ ವರ್ಷಗಟ್ಟಲ್ಲೇ ಕಾಯಬೇಕು ಅಷ್ಟ್ಟು  ಈ ಕ್ಷೇತ್ರವು ಕಾರ್ಣಿಕದ ದೇವಸ್ಥಾನ.# Panolibail Sathya Devathe kallurti#
 

7. ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ಉಪ್ಪಿನಂಗಡಿ :

ಈ ಕ್ಷೇತ್ರವು ದಕ್ಷಿಣಕಾಶಿ ಎಂದು ಹೆಸರುವಾಸಿ. ಕ್ಷೇತ್ರದಲ್ಲಿ ವಿಶೇಷವಾಗಿ  ಕುಮಾರದಾರ ಮತ್ತು ನೇತ್ರಾವತಿ ನದಿಯು ಸಂಗಮ ಸೇರುವ ಸ್ಥಳ. ಇಲ್ಲಿ ಉದ್ಭವಲಿಂಗವು  ನದಿಯಲ್ಲಿ ಕಾಣಬಹುದು. ಇಲ್ಲಿ ದೇವಿ  ಮಹಾಕಾಳಿ ದೇವಸ್ಥಾನವು ಕಾಣಬಹುದು.#Sahasralingeshwara#mahakali#


8. ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ :

        ಈ ಕ್ಷೇತ್ರವು  ಮಕ್ಕಳು ದನ ಕಾಯಕ್ಕೆ ಬಂದವರು  ಕಪಿಲ ನದಿಯ ದಡದಲ್ಲಿ ಸಿಕ್ಕ ಗಣಪತಿ ದೇವರ ವಿಗ್ರಹವನ್ನು ತಂದು ಪೂಜೆ ಮಾಡುತ್ತಾರೆ ಈಗೆ ಸೃಷ್ಟಿಯಾಗಿದೆ ಎಂದು ಇತಿಹಾಸ ಇದೆ. ಕ್ಷೇತ್ರದಲ್ಲಿ ಗರ್ಭಗುಡಿ ಇಲ್ಲ, ಹೊರಂಗಣದಲ್ಲಿ ಕಟ್ಟೆಯನ್ನು ಕಟ್ಟಿ ಮಹಾ ಗಣಪತಿ ಪೂಜೆಯನ್ನು ಮಾಡುತ್ತಾರೆ. ಇಲ್ಲಿ ನೀವು ಬಂದ್ರೆ ಸಾವಿರಾರು ಘಂಟೆಗಳನ್ನು ನೇತಾಕಿ ಇರುವುದನ್ನು ನೋಡಬಹುದು, ಏಕೆಂದರೆ ಭಕ್ತರು ಇಲ್ಲಿ ತನ್ನ ಇಷ್ಟಾರ್ಥ ಸಿದ್ಧಿ ಆದಮೇಲೆ ಘಂಟೆಯನ್ನು ಹರಕೆಯಾಗಿಸಮರ್ಪಿಸುತ್ತಾರೆ.#Southadka Shri Mahaganapathi#


9.ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನ :

      ಈ  ಕ್ಷೇತ್ರದಲ್ಲಿ ನಿತ್ಯವು ಸಾವಿರಾರು ಭಕ್ತರನ್ನು ಕಾಣಬಹುದು. ನಾಗ ದೋಷ ನಿವಾರಣೆಗಾಗಿ ಸಾವಿರಾರು ಭಕ್ತರು ದೇಶ-ವಿದೇಶದಿಂದ ಬಂದು  ಪೂಜೆ ಸಲ್ಲಿಸುತ್ತರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೇವಸ್ಥಾನಗಳಲ್ಲಿ ಪ್ರಮುಖ ಕ್ಷೇತ್ರ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಭಕ್ತರ ಸಂಖ್ಯೆ ಜಾಸ್ತಿ.
#kukke subramani swami#
 

10. ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ  :

       ದಾನ ಧರ್ಮದಿಂದ  ಹೆಸರುವಾಸಿ ಕಾರಣ ಧರ್ಮಸ್ಥಳ ಎಂದು ಹೆಸರು ಬಂದು. ಅಣ್ಣಪ್ಪ ಸ್ವಾಮಿ ಕದ್ರಿಯಿಂದ ಶಿವ ಲಿಂಗ  ತಂದು ಇಲ್ಲಿ ಪ್ರತಿಷ್ಠಾಪನೆ ಮಡಿದ್ದು ಎಂದು ಇತಿಹಾಸ.
ಇಲ್ಲಿ ಯಾವಾಗಲೂ  ಸಾವಿರಾರು ಭಕ್ತರು ಬಂದು ಪೂಜೆ ಸಲ್ಲಿಸಿ ಹೋಗುತ್ತಾರೆ.#Sri  Dharmasthala Manjunatha Swamy#

 Picture credit by Google.
                   

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಟಿಎಂನಿಂದ ಹಣ ಡ್ರಾ ಮಾಡುವುದು ದುಬಾರಿಯಾಗಲಿದೆ

ಎಟಿಎಂ ನಗದು ಹಿಂಪಡೆಯುವಿಕೆ ಶುಲ್ಕಗಳು: ಎಟಿಎಂ (ನಗದು ವಹಿವಾಟು) ನಿಂದ ಹಣವನ್ನು ಹಿಂಪಡೆಯುವುದು ಮುಂದಿನ ತಿಂಗಳ ಆರಂಭದಿಂದ ಅಂದರೆ 2022 ರಿಂದ ದುಬಾರಿಯಾಗಿರುತ್ತದೆ.  ಭಾರತೀಯ ರಿಸರ್ವ್ ಬ್ಯಾಂಕ್ ಎಟಿಎಂಗಳಿಂದ ಹಣ ಡ್ರಾ ಮಾಡುವುದು ದುಬಾರಿಯಾಗಲಿದೆ ಎಂದು ಘೋಷಿಸಿದೆ.  ಜನವರಿ 1 ರಿಂದ, ಉಚಿತ ಎಟಿಎಂ ವಹಿವಾಟಿನ ಮಿತಿಯನ್ನು ದಾಟಲು ಗ್ರಾಹಕರು ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ಗ್ರಾಹಕರಿಗೆ ಉಚಿತ ಮಾಸಿಕ ಮಿತಿಯನ್ನು ಮೀರಿದ ನಗದು ಮತ್ತು ನಗದುರಹಿತ ಎಟಿಎಂ ವಹಿವಾಟುಗಳಿಗೆ ಶುಲ್ಕವನ್ನು ಹೆಚ್ಚಿಸಲು ದೇಶದ ಬ್ಯಾಂಕುಗಳಿಗೆ ಅವಕಾಶ ನೀಡುವುದಾಗಿ ಜೂನ್‌ನಲ್ಲಿ ಆರ್‌ಬಿಐ ಘೋಷಿಸಿತು.  ದರಗಳಲ್ಲಿನ ಬದಲಾವಣೆಯು ಜನವರಿ 1, 2022 ರಿಂದ ಜಾರಿಗೆ ಬರಲಿದೆ.  ಆರ್‌ಬಿಐ ಹೊರಡಿಸಿರುವ ಸುತ್ತೋಲೆಯಲ್ಲಿ, 'ಹೆಚ್ಚಿನ ವಿನಿಮಯ ಶುಲ್ಕ ಮತ್ತು ವೆಚ್ಚದ ಹೆಚ್ಚಳದಿಂದ ನಷ್ಟಕ್ಕೆ ಸ್ವಲ್ಪ ಪರಿಹಾರ ನೀಡಲು ಬ್ಯಾಂಕ್‌ಗಳಿಗೆ ಶುಲ್ಕವನ್ನು ಹೆಚ್ಚಿಸಲು ಅವಕಾಶ ನೀಡಲಾಯಿತು' ಎಂದು ಹೇಳಲಾಗಿದೆ.  ಉಚಿತ ಮಿತಿಯ ನಂತರ ಬ್ಯಾಂಕ್‌ಗಳು ಎಟಿಎಂ ವಹಿವಾಟಿನ ಶುಲ್ಕವನ್ನು ಹೆಚ್ಚಿಸಬಹುದು ಎಂದು ಆರ್‌ಬಿಐ ಹೇಳಿದೆ. ಶುಲ್ಕ ಎಷ್ಟು ಹೆಚ್ಚಾಗುತ್ತದೆ?  ಪ್ರಸ್ತುತ, ಬ್ಯಾಂಕ್‌ನ ಎಟಿಎಂಗಳಿಂದ ನಗದು ಮತ್ತು ನಗದುರಹಿತ ವ್ಯವಹಾರಗಳನ್ನು ಮಾಡಲು ಗ್ರಾಹಕರಿಗೆ ತಿಂಗಳಿಗೆ 5 ಹಣಕಾಸು ವಹಿವಾಟುಗಳು ಉಚಿತವಾಗಿದೆ.  ಇದರ ನಂತರ, ಪ್ರತಿ ...

PAN ಮತ್ತು ಆಧಾರ್ ಲಿಂಕ್ ಮಾಡುವ ಕೊನೆಯ ದಿನಾಂಕ ಹತ್ತಿರದಲ್ಲಿದೆ, ಮನೆಯಲ್ಲೇ ಕುಳಿತು ಲಿಂಕ್ ಮಾಡುವ ಮಾಹಿತಿ ತಿಳಿಯಿರಿ.

                  ಆಧಾರ್ ಮತ್ತು ಪ್ಯಾನ್ ಸಂಖ್ಯೆಯನ್ನು ಲಿಂಕ್ ಮಾಡುವ ಕೊನೆಯ ದಿನಾಂಕವು 31ನೇ ಮಾರ್ಚ್ 2022 ಆಗಿದೆ.  ನೀವು ಇನ್ನೂ ಹಾಗೆ ಮಾಡದಿದ್ದರೆ, ಇದಕ್ಕಾಗಿ ನೀವು ಸುಮಾರು 1000 ರೂಪಾಯಿಗಳ ದಂಡವನ್ನು ಸಹ ಪಾವತಿಸಬೇಕಾಗಬಹುದು.  ಇದರೊಂದಿಗೆ, ಆಧಾರ್‌ನೊಂದಿಗೆ ಪ್ಯಾನ್ ಅನ್ನು ಲಿಂಕ್ ಮಾಡಲು ಕೊನೆಯ ದಿನಾಂಕ ಸೆಪ್ಟೆಂಬರ್ 30 ಆಗಿತ್ತು ಆದರೆ ಅದನ್ನು ಈಗ 31 ಮಾರ್ಚ್ 2022 ಕ್ಕೆ ವಿಸ್ತರಿಸಲಾಗಿದೆ.  ಅತ್ಯಂತ ಮುಖ್ಯವಾದ ವಿಷಯವೆಂದರೆ ನಿಮ್ಮ ಮನೆಯ ಸೌಕರ್ಯದಿಂದ ನಿಮ್ಮ ಪ್ಯಾನ್ ಮತ್ತು ಆಧಾರ್ ಅನ್ನು ಒಟ್ಟಿಗೆ ಜೋಡಿಸಬಹುದು.   ಆನ್‌ಲೈನ್‌ನಲ್ಲಿ ಆಧಾರ್‌ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿ-       ನೀವು ಮೊದಲು ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು, incometax.gov.in/ke/foportal.  ಅದರ ನಂತರ, ನೀವು ನೋಂದಾಯಿಸದಿದ್ದರೆ, ಮೊದಲು ನಿಮ್ಮನ್ನು ನೋಂದಾಯಿಸಿಕೊಳ್ಳಿ, ಅದಕ್ಕೆ ನಿಮ್ಮ ಪ್ಯಾನ್ ಸಂಖ್ಯೆ ನಿಮ್ಮ ಬಳಕೆದಾರ ID ಆಗಿರುತ್ತದೆ ಎಂದು ಹೇಳಿ.  ನಿಮ್ಮ ಬಳಕೆದಾರ ಐಡಿ, ಪಾಸ್‌ವರ್ಡ್ ಮತ್ತು ಜನ್ಮ ದಿನಾಂಕದೊಂದಿಗೆ ಲಾಗಿನ್ ಮಾಡಲು ಹೇಳಿ.  ಪುಟ ತೆರೆದ ತಕ್ಷಣ, ನೀವು ಲಿಂಕ್ ಆಧಾರ್ ಆಯ್ಕೆಯನ್ನು ನೋಡುತ್ತೀರಿ, ಅದರ ನಂತರ ಈ ಆಯ್ಕೆಯನ್ನು ಕ್ಲಿಕ್ ಮಾಡಿ, ಆಯ್ಕೆ...

Best home remedy for hair fall or loss

  ಕೂದಲು ಉದುರುವ ಸಮಸ್ಯೆಗೆ ಮನೆಮದ್ದು   ಇ ತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ, ಸಣ್ಣ ವಯಸ್ಸಿನ ಮಕ್ಕಳಲ್ಲಿ ಮತ್ತು ಯುವಕ- ಯುವತಿಯಲ್ಲಿ ಕಾಣಬಹುದು. ಏಕೆಂದರೆ ಈಗಿನ ಲೈಫ್ಸ್ಟೈಲ್ನಿಂದ ಮತ್ತು ಒತ್ತಡ  ಈ ಸಮಸ್ಯೆ ಜಾಸ್ತಿ ಕಂಡುಬರುತ್ತದೆ. ಕೂದುಲು ಉದುರುವ ಸಮಸ್ಯೆಯನ್ನು ಮನೆಯ ಔಷಧಿ   ಕಡಿಮೆಗೊಳಿಸಬಹುದು. ಮನೆಯಲ್ಲಿರುವ ಸಾಮಾಗ್ರಿಗಳಿಂದಲೇ ಸುಲಭವಾಗಿ ತಯಾರಿಸಬಹುದು.  ಬೇಕಾಗಿರುವ ಸಾಮಗ್ರಿಗಳು ಈ ರೀತಿ ಇದೆ.............! 1. ನಿಂಬೆಹಣ್ಣು(lemon). 2.  ಆಲಿವ್ ಆಯಿಲ್( olive oil). 3.  ಹರಳೆಣ್ಣೆ(Castor oil ). ಮನೆ  ಔಷಧಿ ಮಾಡುವ ವಿಧಾನ:-  ನಿಂಬೆ ಹಣ್ಣಿನ ರಸವನ್ನು ಹರಳೆಣ್ಣೆ ಮತ್ತು ಆಲಿವ್ ಆಯಿಲ್ ಜೊತೆಗೆ ಮಿಶ್ರಣ ಮಾಡಿ ತಲೆಗೆ ಹಚ್ಚುವುದರಿಂದ ತಲೆ ಕೂದಲು  ಉದುರುವ ಸಮಸ್ಯೆ ಕಡಿಮೆಯಾಗುತ್ತದೆ. ಮಾನಸಿಕ ಆರೋಗ್ಯವನ್ನು ಕಾಪಾಡುವುದು ಮುಖ್ಯವಾಗಿರುತ್ತದೆ. ದಯವಿಟ್ಟು ಸಪೋರ್ಟ್ ಮಾಡಿ ಮತ್ತು ಶೇರ್ ಮಾಡಿ.🙏